ಶ್ರೀ ದತ್ತ ಜಯಂತ್ಯುತ್ಸವ

ಶ್ರೀ ದತ್ತ ಮಂದಿರ, ದುರ್ಗಾಕೇರಿ, ಹೊನ್ನಾವರದಲ್ಲಿ ಶ್ರೀಕ್ಷೇತ್ರ ಬಂಗಾರಮಕ್ಕಿಯ ಧರ್ಮಾಧಿಕಾರಿಗಳಾದ ಪರಮಪೂಜ್ಯ ಶ್ರೀ ಶ್ರೀ ಶ್ರೀ ಮಾರುತಿ ಗುರೂಜಿಯವರ ನೇತೃತ್ವದಲ್ಲಿ ‘ಶ್ರೀ ದತ್ತ ಜಯಂತ್ಯುತ್ಸವ’ವು ಮಾರ್ಗಶಿರ ಶುದ್ಧ ಚತುರ್ದಶಿ-ಹುಣ್ಣಿಮೆ ದಿನಾಂಕ: 11-12-2019ರ ಬುಧವಾರ ಬೆಳಿಗ್ಗೆ 8:00 ಗಂಟೆಗೆ ಭಜನೆಯೊಂದಿಗೆ ಆರಂಭಗೊಂಡು ಮಾರ್ಗಶಿರ ಬಹುಳ ಹುಣ್ಣಿಮೆ-ಪಾಡ್ಯ ದಿನಾಂಕ: 12-12-2019ರ ಗುರುವಾರ ಮುಂಜಾನೆ 9:00 ಗಂಟೆಗೆ ಮಂಗಳದೊಂದಿಗೆ ಸಂಪನ್ನಗೊಳ್ಳುತ್ತದೆ. ಭಕ್ತ ಮಹಾಜನರೆಲ್ಲರೂ ಭಾಗವಹಿಸಿ ಶ್ರೀ ಗುರುಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ. ವಿ.ಸೂ:- 1) ದಿ:...

Continue reading

ಮಹಾದೀಪೋತ್ಸವ

ಶ್ರೀಕ್ಷೇತ್ರ ಬಂಗಾರಮಕ್ಕಿಯ ಶ್ರೀ ವೀರಾಂಜನೇಯ ದೇವರ ಸನ್ನಿಧಿಯಲ್ಲಿ ಕಾರ್ತಿಕ ಶುದ್ಧ ದ್ವಿತೀಯಾ ದಿನಾಂಕ 29-10-2019ರ ಮಂಗಳವಾರದಿಂದ ಕಾರ್ತಿಕ ಬಹುಳ ಅಮವಾಸ್ಯೆ ದಿನಾಂಕ 26-11-2019ರ ಮಂಗಳವಾರದವರೆಗೆ ಶ್ರೀ ದೇವರ ಸನ್ನಿಧಿಯಲ್ಲಿ ದೀಪೋತ್ಸವ ನಡೆಯಲಿದ್ದು, ಭಕ್ತಾದಿಗಳಿಗೆ ದೀಪೋತ್ಸವ ಸೇವೆ ಮಾಡಲು ಅವಕಾಶವಿದೆ. ಕಾರ್ತಿಕ ಬಹುಳ ಅಮವಾಸ್ಯೆ ದಿನಾಂಕ 26-11-2019ರ ಮಂಗಳವಾರದಂದು ಪಲ್ಲಕ್ಕಿ ಉತ್ಸವ, ಮಹಾಪೂಜೆ, ಭಜನೆ (ಜಾಗರಣೆ) ಹಾಗೂ ಮಹಾದೀಪೋತ್ಸವ ಕಾರ್ಯಕ್ರಮವು ನಡೆಯಲಿದೆ. ಭಕ್ತಾದಿಗಳು ದೀಪೋತ್ಸವದ ವಿಶೇಷ ಸೇವೆಗಳಲ್ಲಿ ಪಾಲ್ಗೊಂಡು ಶ್ರೀ ದೇವರ...

Continue reading